ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಯ ವಿಜ್ಞಾನ ಭವನದಲ್ಲಿಂದು ರಾಷ್ಟ್ರೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಪರೀಕ್ಷಾ ಮಂಡಳಿ-NBEMSನ 22ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ, ಪ್ರಮಾಣಪತ್ರ ಹಾಗೂ ಪದಕ ವಿತರಿಸಿದರು.
ಬಳಿಕ ಅವರು, ಸುಮಾರು 7 ಸಾವಿರದ 500 ವೈದ್ಯರು ಚಿನ್ನದ ಪದಕ ಪಡೆದಿದ್ದು, ಅದರಲ್ಲಿ ಪ್ರತಿಶತ 50ಕ್ಕೂ ಮಿಗಿಲಾಗಿ ಮಹಿಳಾ ವೈದ್ಯರು ಇರುವುದು ಹರ್ಷದ ಸಂಗತಿ. ವೈದ್ಯ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ವೈದ್ಯಕೀಯ ಸೇವೆ ಅತಿ ವಿಶಿಷ್ಟವಾದ ಸೇವೆ. ಮಾನವೀಯ ಕಳಕಳಿಯಿಂದ ಕೆಲಸ ಮಾಡುವುದು ಅಗತ್ಯ. ಆರೋಗ್ಯ ಸೇವೆ ಮತ್ತು ಕಾಳಜಿ, ಬಹು ಮುಖ್ಯವಾದ ಮಾನವತಾವಾದವಾಗಿದೆ. ಸಮರ್ಪಣಾ ಭಾವದಿಂದ ಕೆಲಸ ಮಾಡುವಂತೆ ಸಲಹೆ ನೀಡಿದರು.
ಬಡಜನರ ವೈದ್ಯಕೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಹಾಗೂ ಗುಣಾತ್ಮಕ ಸೇವೆ ಸಲ್ಲಿಸಿ ಎಂದು ಅವರು ಹೇಳಿದರು.
Ещё видео!