ಬೆಳ್ತಂಗಡಿ ತಾಲೂಕಿನ ಕಾಜೂರು ಕಲ್ಕುಡ ದೈವ ನಿರ್ಮಿಸಿದ ಪ್ರಾಚೀನ ಕಾಲದ ಒಂದು ಕಲ್ಲಿನ ಮಾಡ ಇದೆ.ಇದು ಈಗಿನ ಕಾಜೂರು ಮಸೀದಿ ಹತ್ತಿರ ಇದೆ. ಪ್ರಾಚೀನ ಕಾಲದಿಂದ ಇದು ಇದೆ ರೀತಿ ಇದ್ದು,ಇದರ ಬಗ್ಗೆ ಮಾಹಿತಿ ಹುಡುಕುತ್ತಾ ಹೋದಾಗ ಇದು ಈಗಿನ ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಂಬಂಧ ಹೊಂದಿರುವ ಐತಿಹ್ಯ ಇದೆ. ಈಗ ತುಂಬಾ ನಿರ್ಲಕ್ಷಕ್ಕೆ ಒಳಗಾಗಿದೆ.ಈ ಕಲ್ಲಿನ ರಚನೆಯ ಹಿಂದೆ ಇಡೀ ತುಳುನಾಡಿನ ದೈವಗಳ ಇತಿಹಾಸ ಅಡಗಿದೆ.ಇದೇ ಭಾಗದ ಮೇಲೆ ಇರುವ ಘಾಟಿ ಮೂಲಕ ದೈವಗಳು ಇಳಿದು ತುಳುನಾಡಿಗೆ ಕಾಲಿಟ್ಟ ಬಗ್ಗೆ ಕಥೆ ಇದೆ. ಇದು ಬಂಗಾಡಿ ಸೀಮೆಯ ದೈವಗಳ ಮೂಲ ಸ್ಥಾನ.ಇಲ್ಲಿ ಕಲ್ಕುಡ ನೆಲೆಯಾಗಿದ್ದಾನೆ.ಆದರೆ ಹಿಂದಿನ ಕಾಲದಲ್ಲಿ ಇಲ್ಲಿ ಕೋಲ ನಡೆದಿರಬಹುದು.ಆದರೆ ಬಂಗಾಡಿ ಅರಸರ ಕಾಲದಲ್ಲಿ ಇಲ್ಲಿ ಕೋಲ ನಿಂತಿರುವ ಸಾಧ್ಯತೆ ಇದೆ.ಈ ಭಾಗದ ಸಂಶೋದನೆ ಮಾಡುವ ಅಗತ್ಯ ಇದೆ.ಅದೇರೀತಿ ಈ ಕಲ್ಲ ಮಾಡಕ್ಕೆ ಸಂಬಂಧ ಪಟ್ಟ ಭೂಮಿಗೆ ಸುತ್ತ ಬೇಲಿ ಹಾಕಿ ಈ ಸ್ಮಾರಕ ಉಳಿಸಿಕೊಳ್ಳುವ ಅಗತ್ಯ ಇದೆ.
![](https://i.ytimg.com/vi/cxrAmHDRMNE/maxresdefault.jpg)