#vijayanagara #history #legal #justice #anveshi
Support Us via Paypal. Link: [ Ссылка ]
ಯಾವುದೇ ಸಾಮ್ರಾಜ್ಯದ ಆಡಳಿತಾವಧಿಯ ಸಮಾಜದಲ್ಲಿ ದಮನಿಸುವುದು, ಒತ್ತಡ ಹೇರುವುದು ಮುಂತಾದ ಸಾಮಾಜಿಕ ಅನಿಷ್ಟಗಳ ಇರುವಿಕೆ ವಾಸ್ತವವಾಗಿತ್ತು.
ವಿಜಯನಗರ ಸಾಮ್ರಾಜ್ಯದ ರಾಜರು ಸಮಾಜದ ಋಣಾತ್ಮಕ ಅಂಶಗಳನ್ನು ಮನಗಂಡಿದ್ದರು. ಆದರೂ ಅವರೇ ಸ್ವತಃ ನ್ಯಾಯದಾನ ವ್ಯವಸ್ಥೆಯಲ್ಲಿ ಭಾಗವಹಿಸಿ ಈ ವ್ಯವಸ್ಥೆಗೆ ಒಂದು ಸ್ಪಷ್ಟವಾದ ರೂಪುರೇಷೆಗಳನ್ನು ನೀಡಲು ಪ್ರಯತ್ನಿಸಿದ್ದರು.
ಪ್ರಭಾವಿ ವ್ಯಕ್ತಿಗಳ ಅಹಮಿಕೆಯನ್ನು ನಿರ್ವಹಿಸುವ ಅನಿವಾರ್ಯತೆ, ಪ್ರಮುಖ ಅಧಿಕಾರಿಗಳು ಮಾಡಿದ ದೌರ್ಜನ್ಯ ಮುಂತಾದ ಸಾಮಾಜಿಕ ಅನಿಷ್ಟಗಳ ನಡುವೆ ಸಾಮ್ರಾಜ್ಯದ ರಾಜರು ಅನೇಕ ನಿದರ್ಶನೀಯ ಐತಿಹಾಸಿಕ ತೀರ್ಮಾನಗಳನ್ನು ನೀಡಿದ್ದರು. ಈ ತೀರ್ಮಾನಗಳು ಅಂದಿನ ಪರಿಸ್ಥಿತಿಯನ್ನು ಮೀರಿ ಭವಿಷ್ಯದ ದಿನಗಳಲ್ಲಿಯೂ ಅನ್ವಯವಾಗುವ ದೂರಗಾಮಿ ಪರಿಣಾಮಗಳನ್ನು ಹೊಂದಿದ್ದವು.
ನ್ಯಾಯದಾನ ವ್ಯವಸ್ಥೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜರು ವ್ಯವಸ್ಥೆಯ ಮುಖ್ಯಸ್ಥರಾಗಿ ಸಾಕಷ್ಟು ಯಶಸ್ಸು ಗಳಿಸಿದ್ದರು. ಧರ್ಮಶಾಸ್ತ್ರಗಳನ್ನು ಆಧರಿಸಿ ನ್ಯಾಯ ನಿರ್ಣಯ ಮಾಡುತ್ತಿದ್ದ ಕಾರಣ ರಾಜರೂ ಉತ್ತಮ ನ್ಯಾಯಾಧೀಶರಾಗಿದ್ದರು ಎನ್ನುವುದನ್ನು ಇತಿಹಾಸ ಸಾರುತ್ತಿದೆ.
Write to us:
Email: teamanveshi@gmail.com
Twitter: @CreativePragna
Facebook: www.facebook.com/anveshichannel
Instagram: www.instagram.com/anveshichannel
LinkedIN: [ Ссылка ]...
![](https://i.ytimg.com/vi/tGFRdLNe9Hg/maxresdefault.jpg)